ಬೆಳ್ತಂಗಡಿ: ಲಾಯಿಲ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ (ಪಿ.ಡಿ.ಒ) ಭೂ ಪರಿವರ್ತನೆಯಾಗದ ಜಾಗದಲ್ಲಿ ಹೊಟೇಲ್ ಉದ್ಯಮ ನಡೆಸಲು ಕಾನೂನು ಬಾಹಿರವಾಗಿ ವಾಣಿಜ್ಯ ವ್ಯವಹಾರದ ಪರವಾನಿಗೆ ನೀಡಿರುವ ಬಗ್ಗೆ ಆ.6ರಂದು ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಳ್ತಂಗಡಿ ತಾಲೂಕಿನ ಲಾಯಿಲ ಗ್ರಾಮದ ಆಯಿಶಾ ಕೋಂ ಎಚ್. ಅಬ್ದುಲ್ ಕರೀಮ್ ಎಂಬವರ ಸ.ನಂ: 164/2B1B ರಲ್ಲಿ 0.01.50 ಎಕ್ರರೆ ಜಾಗವನ್ನು ವಾಣಿಜ್ಯ ಉದ್ದೇಶಕ್ಕೆ ಭೂ ಪರಿವರ್ತನೆ ಮಾಡದೇ ನ್ಯೂ ಮೈನಾ ಹೊಟೇಲ್ ಹೆಸರಿನಲ್ಲಿ ವಾಣಿಜ್ಯ ವ್ಯವಹಾರದ ಉದ್ದೇಶಕ್ಕಾಗಿ ಜಾಗದ ಮಾಲೀಕತ್ವ ಪತ್ನಿ ಆಯಿಶಾ ಅವರ ಹೆಸರಿನಲ್ಲಿದ್ದರೂ ಪತಿ ಎಚ್. ಅಬ್ದುಲ್ ಕರೀಂ ಎಂಬವರಿಗೆ 30.09.2025 ರಂದು ಲಾಯಿಲಾ ಗ್ರಾಮ ಪಂಚಾಯತ್ ನಲ್ಲಿ ಪ್ರಭಾರ ಅಭಿವೃದ್ಧಿ ಅಧಿಕಾರಿ (ಪಿಡಿಒ) ಆಗಿದ್ದ ಶ್ರೀನಿವಾಸ ಡಿ.ಪಿ. ಇವರು ಕಾನೂನು ಬಾಹಿರವಾಗಿ ಲೈಸೆನ್ಸ್ ನೀಡುದ್ದಾರೆ.
ಭೂ ಪರಿವರ್ತನೆಯಾಗದೆ ಮತ್ತು 9/11 ಸೃಜನೆಯಾಗದೆ ಅನಧಿಕೃತವಾಗಿ ವಾಣಿಜ್ಯ ಉದ್ದೇಶಕ್ಕೆ ಶ್ರೀನಿವಾಸ ಡಿ.ಪಿ. ಅವರು ಕಾನೂನು ಬಾಹಿರವಾಗಿ ವಾಣಿಜ್ಯ ಉದ್ದೇಶಕ್ಕೆ ಲೈಸೆನ್ಸ್ ನೀಡಿ ಕಾನೂನು ಬಾಹಿರ ಕೃತ್ಯ ಮಾಡಿರುವುದರಿಂದ ತಕ್ಷಣ ಈ ಬಗ್ಗೆ ತನಿಖೆ ನಡೆಸಿ ಅಭಿವೃದ್ಧಿ ಅಧಿಕಾರಿ (ಪಿಡಿಓ) ಆಗಿದ್ದ ಶ್ರೀನಿವಾಸ ಡಿ.ಪಿ. ಹಾಗೂ ಕಾನೂನು ಪ್ರಕಾರ ಯಾವುದೇ ದಾಖಲೆಗಳಿಲ್ಲದೆ ಲೈಸೆನ್ಸ್ ಮಾಡಿಸಿಕೊಂಡ ಆಯಿಶಾ ಮತ್ತು ಎಚ್. ಅಬ್ದುಲ್ ಕರೀಂ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಲಾಯಿಲ ಗ್ರಾಮಸ್ಥರೊಬ್ಬರು ಆ.6 ರಂದು ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
Discover more from Nammura Suddi
Subscribe to get the latest posts sent to your email.
